பயனர்:Shriheeran/மணல்தொட்டி: திருத்தங்களுக்கு இடையிலான வேறுபாடு

உள்ளடக்கம் நீக்கப்பட்டது உள்ளடக்கம் சேர்க்கப்பட்டது
Shriheeran (Talk) பயனரால் செய்யப்பட்ட திருத்தம் 2186223 இல்லாது செய்யப்பட்டது
No edit summary
வரிசை 1:
{{Infobox ಭಾರತದ ಭೂಪಟ
| native_name = ಮುಂಬೈ
| other_name = ಮುಂಬಯಿ
| type = metropolitan city
| type_2 = capital
| skyline= Gateway.jpg
| skyline_caption= ಗೇಟ್‍ವೇ ಅಫ್ ಇ೦ಡಿಯಾ
| locator_position = left
|latd=18 |latm=58 |latNS=N
|longd=72 |longm=49 |longEW=E
| state_name = ಮಹಾರಾಷ್ಟ್ರ
| district = [[ಮುಂಬೈ ನಗರ ಜಿಲ್ಲೆ]]
| region =
| leader_title = Mayor
| leader_name = Snehal Ambekar
| altitude = ೮
| population_as_of = ೨೦೧೧
| population_city = ೧,೨೬,೨೨,೫೦೦
| population_rank = ೧ನೇ
| population_total =
| population_density =
| area_magnitude =
| area_total = 603
| area_total_cite =
| area_telephone = +91-22
| postal_code = 400 001 to 400 107
| vehicle_code_range = MH-01 (Central), MH-02 (West), MH-03 (East), MH-47 (North)
| unlocode = IN MUM
| footnotes =
}}
 
ಮುಂಬಯಿನಗರ, [[ಮಹಾರಾಷ್ಟ್ರ|ಮಹಾರಾಷ್ಟ್ರದ]] ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು [[ಭಾರತ|ಭಾರತದಲ್ಲಿಯೇ]] ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ.
<div style="float:{{dir|{{CURRENTCONTENTLANGUAGE}}|left|right}};width:50%;font-weight:bold;line-height:110%;margin:1% 1% 0% 1%;">
 
ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. [[ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ]] ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.
 
== ಹೆಸರಿನ ಮೂಲ ==
ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ, ಬ್ರಿಟಿಷರು ಬಾಂಬೆ ಎಂದೂ ನಾಮಕರಣ ಮಾಡಿದ್ದರು. ಬಾಂಬೆ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿ '''ಮುಂಬಯಿ''' ಎಂದು ೧೯೯೫ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಮುಂಬಯಿ ,ಮುಂಬಯಿ ಹಾಗೂ ಬಾಂಬೆ ಎಂದು ಕರೆಯುವುದು ರೂಢಿಯಲ್ಲಿದೆ.
== ಇತಿಹಾಸ ==
ಇಂದಿನ ಮುಂಬಯಿ ಹಿಂದೆ ಏಳು ದ್ವೀಪಗಳ ಸಮೂಹವಾಗಿತ್ತು. ಶಿಲಾಯುಗದ ಕಾಲದಿಂದಲೂ ಈ [[ದ್ವೀಪ|ದ್ವೀಪಗಳಲ್ಲಿ]] ಜನವಸತಿಯಿದ್ದ ಪುರಾವೆಗಳಿವೆ. ಇವುಗಳಲ್ಲಿ ಅತ್ಯಂತ ಪುರಾತನ ದಾಖಲೆ ಕ್ರಿ.ಪೂ. ೨೫೦ರಷ್ಟು ಹಿಂದಿನದಾಗಿದ್ದು, ಗ್ರೀಕ್ ಮೂಲದ ಈ ದಾಖಲೆಯಲ್ಲಿ ಮುಂಬಯಿಯನ್ನು Heptanesia (ಅರ್ಥಾತ್ ಸಪ್ತದ್ವೀಪಸಮೂಹ)ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಕ್ರಿ.ಪೂ ೩ರಲ್ಲಿ ಈ ದ್ವೀಪಗಳು [[ಸಾಮ್ರಾಟ್ ಅಶೋಕ|ಸಾಮ್ರಾಟ್ ಅಶೋಕನ]] [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಭಾಗವಾಗಿದ್ದವು. . ಈ ಪ್ರದೇಶವು ಮುಂದೆ ಕ್ರಿ.ಶ. ೧೩೪೩ರವರೆಗೂ ಶಿಲಾಹಾರರ ಸಾಮ್ರಾಜ್ಯದ ಅಂಗವಾಗಿ, ತದನಂತರ [[ಗುಜರಾತ್]] ಸಾಮ್ರಾಜ್ಯದ ಅಧೀನವಾಯಿತು. [[ಎಲಿಫೆಂಟಾ ಗುಹೆಗಳು]] ಹಾಗೂ ವಾಳಕೇಶ್ವರ ದೇವಾಲಯಗಳು ಇದೇ ಕಾಲದಲ್ಲಿ ನಿರ್ಮಿಸಲ್ಪಟ್ಟವು. ೧೫೩೪ರಲ್ಲಿ [[ಬಹಾದ್ದೂರ ಷಾ|ಬಹಾದ್ದೂರ ಷಾನಿಂದ]] ಮುಂಬಯಿಯನ್ನು ಪೋರ್ಚುಗೀಸರು ವಶಪಡಿಸಿಕೊಂಡು, ಅದಕ್ಕೆ ಮಾಮ್ ಬಹಿಯಾ ಎಂದು ಹೆಸರಿಟ್ಟರು. ೧೬೬೧ರ ಇಂಗ್ಲೆಂಡಿನ ರಾಜ ಎರಡನೆಯ ಚಾರ್ಲ್ಸ್ ಹಾಗೂ ಪೋರ್ಚುಗೀಸ್ ರಾಜಕನ್ಯೆ ಕ್ಯಾಥರೀನ್ ದ ಬ್ರಗಾಂಝ ಇವರ ವಿವಾಹದ ಸಂದರ್ಭದಲ್ಲಿ , ಮುಂಬಯಿ ಪ್ರದೇಶವನ್ನು ಪೋರ್ಚುಗೀಸರಿಂದ ಬಳುವಳಿಯಾಗಿ ಪಡೆದ ಬ್ರಿಟಿಷ್ ರಾಜಮನೆತನವು, ಮುಂದೆ [[ಈಸ್ಟ್ ಇಂಡಿಯಾ ಕಂಪನಿ|ಈಸ್ಟ್ ಇಂಡಿಯಾ ಕಂಪನಿಗೆ]] ಬಾಡಿಗೆಯ ಮೇಲೆ ಮುಂಬಯಿಯನ್ನು ನೀಡಿತು. ತಮ್ಮ ವ್ಯಾಪಾರಕ್ಕಾಗಿ ಬಂದರು ನಿರ್ಮಿಸಲು ಮುಂಬಯಿ ಭೂ ಖಂಡವು ಪ್ರಶಸ್ತವಾದದ್ದು ಎಂದು ಈಸ್ಟ್ ಇಂಡಿಯಾ ಕಂಪನಿ ಭಾವಿಸಿತು. ೧೬೬೧ರಲ್ಲಿ ೧೦,೦೦೦ದಷ್ಟಿದ್ದ ಮುಂಬಯಿಯ ಜನಸಂಖ್ಯೆ ೧೬೮೭ರಲ್ಲಿ ೬೦,೦೦೦ಕ್ಕೇರಿತ್ತು. ೧೬೮೭ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಕಾರ್ಯಾಲಯವನ್ನು ಸೂರತ್ತಿನಿಂದ ಮುಂಬಯಿಗೆ ಬದಲಾಯಿಸಿತು.ಕಾಲಾಂತರದಲ್ಲಿ ಇದು ಮುಂಬಯಿ ಪ್ರಾಂತದ (Bombay Province) ರಾಜಧಾನಿಯಾಯಿತು.
 
ಹಾರ್ನ್^ಬೀ ವೆಲ್ಲಾರ್ಡ್ (Hornby Vellard)ಎಂಬ ಯೋಜನೆಯಲ್ಲಿ ೧೮೧೭ರಿಂದ ೧೮೪೫ರ ವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ ೪೩೮ ಚದರ ಕಿ.ಮೀ ಗಳಿಗೇರಿತು. [[ಏಶಿಯಾ|ಏಶಿಯಾದಲ್ಲಿಯೇ]] ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ ೧೮೫೩ರಲ್ಲಿ ನಿರ್ಮಿಸಲಾಯಿತು. [[ಅಮೆರಿಕಾ|ಅಮೆರಿಕಾದಲ್ಲಿ]] ಅಂತರ್ಯುದ್ಧ (Civil War)ದ ಕಾಲದಲ್ಲಿ , ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ, ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು.
 
ಮುಂಬಯಿ ಮುಂದಿನ ೩೦ ವರ್ಷಗಳಲ್ಲಿ ದಾಪುಗಾಲಿನಿಂದ ಪ್ರಗತಿ ಹೊಂದಿತು. ೧೯೦೬ರ ಸುಮಾರಿಗೆ ಮುಂಬಯಿಯ ಜನಸಂಖ್ಯೆ ೧೦ ಲಕ್ಷ ದಾಟಿ, [[ಕೋಲ್ಕತ್ತಾ|ಕೋಲ್ಕತ್ತಾಬಿಟ್ಟರೆ]] ಭಾರತದ ಅತಿ ದೊಡ್ಡ ನಗರವಾಗಿ ಹೆಸರಾಯಿತು. ಮುಂಬಯಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. ೧೯೪೨ರಲ್ಲಿ ಮಹಾತ್ಮ ಗಾಂಧಿ ಸುಪ್ರಸಿದ್ಧ 'ಭಾರತ ಬಿಟ್ಟು ತೊಲಗಿ' (ಚಲೇಜಾವ್) ಚಳುವಳಿಗೆ ನಾಂದಿ ಹಾಡಿದ್ದು ಮುಂಬಯಿಯಲ್ಲಿಯೇ. ಸ್ವಾತಂತ್ರ್ಯಾನಂತರ ಮುಂಬಯಿ ಪ್ರಾಂತೀಯ ರಾಜಧಾನಿಯಾಯಿತು. ೧೯೫೦ರಲ್ಲಿ ಮುಂಬಯಿ ಸಾಲ್ಸೆಟ್ ದ್ವೀಪದವರೆಗೂ ಹಬ್ಬಿತ್ತು.
 
೧೯೫೫ರ ಸುಮಾರಿಗೆ ಮುಂಬಯಿ ಪ್ರಾಂತವನ್ನು [[ಮಹಾರಾಷ್ಟ್ರ]] ಹಾಗೂ [[ಗುಜರಾತ್]] ಎಂದು ವಿಭಜಿಸಬೇಕು ಎಂಬ ಕೂಗು ಹೆಚ್ಚಾಗತೊಡಗಿತು. ಮುಂಬಯಿ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯಬೇಕು ಎಂದೂ ಕೆಲವರ ಅಭಿಮತವಾಗಿತ್ತು. ಸಂಯುಕ್ತ [[ಮಹಾರಾಷ್ಟ್ರ]] ಚಳುವಳಿ ಇದನ್ನು ವಿರೋಧಿಸಿ , ಮುಂಬಯಿಯನ್ನು [[ಮಹಾರಾಷ್ಟ್ರ|ಮಹಾರಾಷ್ಟ್ರದ]] ರಾಜಧಾನಿಯಾಗಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು.
 
ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ , ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ [[ಕೋಲ್ಕತ್ತಾ|ಕೋಲ್ಕತ್ತಾವನ್ನು]] ಹಿಂದೆ ಹಾಕಿ [[ಭಾರತ|ಭಾರತದ]] ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳಿಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ, ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ [[ಶಿವಸೇನಾ]] ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. [[ಬಾಳಾಸಾಹೇಬ ಠಾಕರೆ|ಬಾಳಾಸಾಹೇಬ ಠಾಕರೆಯವರ]] ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ, ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು.
== ಭೂಗೋಳ ==
[[ಭಾರತ|ಭಾರತದ]] ಪಶ್ಚಿಮ ತೀರದ , [[ಕೊಂಕಣ]] ಪ್ರದೇಶದಲ್ಲಿರುವ [[ಉಲ್ಹಾಸ ನದಿ|ಉಲ್ಹಾಸ ನದಿಯ]] ಮುಖಜ ಪ್ರದೇಶವಾಗಿರುವ [[ಶಾಸ್ತಿ ದ್ವೀಪ|ಶಾಸ್ತಿ ದ್ವೀಪದ]] (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು, ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) ೧೦ರಿಂದ ೧೫ ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು , ೪೫೦ ಮೀಟರು ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ ೪೬೮ ಚದರ ಕಿ.ಮೀ.
ನಗರದ ಸರಹದ್ದಿನಲ್ಲಿಯೇ [[ತುಳಸಿ]], [[ವಿಹಾರ]] ಮತ್ತು [[ಪೊವಾಯಿ]] ಎಂಬ ಮೂರು ಕೆರೆಗಳಿವೆ. ಇದರಲ್ಲಿ ಮೊದಲ ಎರಡು [[ಬೋರಿವಲಿ ರಾಷ್ಟ್ರೀಯ ಉದ್ಯಾನವನ|ಬೋರಿವಲಿ ರಾಷ್ಟ್ರೀಯ ಉದ್ಯಾನವನದ]] ಒಳಗಿದ್ದು , ಮುಂಬಯಿಯ ಕುಡಿಯುವ ನೀರನ್ನು ಭಾಗಶಃ ಪೂರೈಸುತ್ತವೆ. ಇದೇ ಉದ್ಯಾನದಿಂದಲೇ ಉಗಮವಾಗುವ ಮೂರೂ ಸಣ್ಣ ನದಿಗಳೂ ಮುಂಬಯಿ ನಗರದಲ್ಲಿ ಹರಿಯುತ್ತವೆ.
 
ನಗರದ ಕಿನಾರೆಯಲ್ಲಿ ಅನೇಕ ಕೊಲ್ಲಿಗಳು (bays and creeks) ಕಂಡುಬರುತ್ತವೆ. ಸಾಲ್ಸೆಟ್ ದ್ವೀಪದ ಪೂರ್ವಭಾಗದಲ್ಲಿ ವಿಪುಲವಾದ ಜೀವವೈವಿಧ್ಯವಿರುವ mangrove swamps ಗಳಿವೆ. ಪಶ್ಚಿಮಭಾಗದಲ್ಲಿ [[ಜುಹು]] ಮತ್ತು [[ಚೌಪಾಟಿ]] ಎಂಬ ಎರಡು ಬೀಚುಗಳಿವೆ.
 
ಸಮುದ್ರಸಾಮೀಪ್ಯದ ಕಾರಣ ಇಲ್ಲಿ ಮಣ್ಣಿನ ಮೇಲ್ಪದರ ಮರಳುಮಿಶ್ರಿತವಾಗಿದೆ. ಉಪನಗರಗಳಲ್ಲಿ alluvial and loamy ಮಣ್ಣಿನ ಪದರ ಬಹುತೇಕವಾಗಿ ಕಾಣಬರುತ್ತದೆ. ಸಮೀಪದಲ್ಲಿರುವ ಮೂರು ಭೂಬಿರುಕುಗಳ (faults) ಕಾರಣ ಮುಂಬಯಿ ನಗರ ಸಕ್ರಿಯ ಭೂಕಂಪ ವಲಯದಲ್ಲಿದೆ. ಭೂಕಂಪ ಸಾಧ್ಯತೆಯಲ್ಲಿ ಮುಂಬಯಿಯನ್ನು ಮೂರನೆಯ ವಲಯವೆಂದು ನಮೂದಿಸಲಾಗಿದೆ, ಅಂದರೆ, ರಿಚ್ಟರ್ ಮಾಪಕದಲ್ಲಿ ೬.೫ ರ ಪರಿಮಾಣದ ಭೂಕಂಪವಾಗುವ ಸಾಧ್ಯತೆಗಳಿವೆ.
 
ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ( Island City) ಎಂದೂ ಕರೆಯಲಾಗುತ್ತದೆ.
== ಹವಾಮಾನ ==
ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ.
 
'''ಆರ್ದ್ರ ಹವಾಮಾನ''' ಮಾರ್ಚಿಯಿಂದ ಆಕ್ಟೋಬರ್ ವರೆಗಿದ್ದು , ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಮಾನ ೩೦ ಡಿಗ್ರಿ ಸೆಂಟಿಗ್ರೇಡ್ ವರೆಗಿರುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾರಿ ವಾರ್ಷಿಕ ಮಳೆ ೨೨೦೦ ಮಿ.ಮೀ. ೧೯೫೪ರಲ್ಲಿ ಬಿದ್ದ ೩೪೫೨ ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ, ಜುಲೈ ೨೬, ೨೦೦೫ ರಂದು ಬಿದ್ದ ೯೪೪ ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ.
 
ನವೆಂಬರಿನಿಂದ ಫೆಬ್ರುವರಿಯವರೆಗೆ '''ಒಣ ಹವೆ'''ಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವೆಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ ೩೮ ಡಿಗ್ರಿ ಇದ್ದರೆ, ಕನಿಷ್ಠ ೧೧ ಡಿಗ್ರಿಯವರೆಗಿರುತ್ತದೆ. ೪೩ ಡಿಗ್ರಿ ಮತ್ತು ೭.೪ ಡಿಗ್ರಿ , ಕ್ರಮವಾಗಿ, ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನದ ದಾಖಲೆಗಳು.
== ಅರ್ಥ ವ್ಯವಸ್ಥೆ ==
ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ೧೦% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. [[ಭಾರತ|ಭಾರತದ]] ಆದಾಯ ತೆರಿಗೆಯ ೪೦%, ಕೇಂದ್ರ ಅಬಕಾರಿಯ (Central excise) ೨೦%, ಕಸ್ಟಮ್ಸ್ ಸುಂಕದ ೬೦% , ರಫ್ತು ವ್ಯಾಪಾರದ ೪೦% , ಅಷ್ಟೇ ಅಲ್ಲ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, [[ಮುಂಬಯಿ ಶೇರು ಬಜಾರು]], [[ಭಾರತೀಯ ರಿಸರ್ವ್ ಬ್ಯಾಂಕ್]] , [[ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್]] ಇವೇ ಅಲ್ಲದೇ [[ಟಾಟಾ]], [[ಗೋದ್ರೇಜ್]] ಮತ್ತು [[ರಿಲಯನ್ಸ್]] ನಂಥಹಾ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ.
 
ಸುಮಾರು ೧೯೮೦ರವರೆಗೂ ಮುಂಬಯಿಯ ಬಟ್ಟೆ ಗಿರಣಿಗಳು ಆರ್ಥಿಕ ವ್ಯವಸ್ಥೆಯ ಆಧಾರಸ್ಥಂಭಗಳಾಗಿದ್ದವು. ಆದರೆ ಈಗ ತಂತ್ರಜ್ಙಾನ, ಆಭರಣಗಳ ಪಾಲೀಶ್ ಮಾಡುವಿಕೆ, ಆರೋಗ್ಯ, ಮಾಹಿತಿ ತಂತ್ರಜ್ಙಾನ ಮೊದಲಾದ ಉದ್ಯಮಗಳು ಮಹತ್ವದ ಕೊಡುಗೆ ನೀಡುತ್ತಿವೆ.ಮುಂಬಯಿ ರಾಜಧಾನಿಯೂ ಆಗಿರುವ ಕಾರಣ, ರಾಜ್ಯ ಹಾಗೂ ಕೇಂದ್ರ ಸರಕಾರೀ ನೌಕರರು ಸಹಾ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಕೈಗಾಡಿಯ ಕಿರುವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಮೆಕ್ಯಾನಿಕ್ ಇತ್ಯಾದಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಕುಶಲ ಹಾಗೂ ಅ-ಕುಶಲ ಕಾರ್ಮಿಕರೂ ವಿಪುಲವಾಗಿದ್ದಾರೆ. ಮುಂಬಯಿ ಬಂದರೂ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.
 
ಮುಂಬಯಿಯ ಮನರಂಜನಾ ಉದ್ಯಮವಂತೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಭಾರತದ ಪ್ರಮುಖ ಕಿರುತೆರೆ, ಉಪಗ್ರಹ ವಾಹಿನಿಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳ ಕೇಂದ್ರ ಮುಂಬಯಿ. '[[ಬಾಲಿವುಡ್]] ' ಎಂದೇ ಹೆಸರಾಗಿರುವ ಹಿಂದಿ ಚಲನಚಿತ್ರೋದ್ಯಮದ ಕೆಂದ್ರವೂ ಮುಂಬಯಿಯೇ.ಮುಂಬಯಿಯ ಆರ್ಥಿಕ ಪ್ರಗತಿಗೆ ಗುಜರಾತಿ, ಮಾರವಾಡಿ ಮತ್ತು ಪಾರಸೀ ಜನಾಂಗದ ಗಣನೀಯ ಕೊಡುಗೆಯಿದೆ.
== ರಾಜ್ಯ-ಸರಕಾರ ಹಾಗೂ ಮಹಾನಗರಪಾಲಿಕೆ ==
[[ಬೃಹನ್ಮುಂಬಯಿ ಮಹಾನಗರಪಾಲಿಕೆ]] ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು, ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು [[ಮಹಾರಾಷ್ಟ್ರ]] ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು ೧೪ ಉಪವಿಭಾಗಗಳಾಗಿ ವೀಭಾಗಿಸಿದ್ದು , ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ.
 
ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ ೨೨೭ ನಗರಸೇವಕರು (ಕಾರ್ಪೋರೇಟರುಗಳು), ೫ ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎರ್ಲಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು.
 
ಮುಂಬಯಿ ಪೋಲೀಸ್ ರಾಜ್ಯದ ಗೃಹ ಖಾತೆಯ ಅಧೀನದಲ್ಲಿ ಕೆಲಸಮಾಡುತ್ತದೆ. ಐ.ಪಿ.ಎಸ್ ದರ್ಜೆಯ ,ಕಮೀಷನರ್ ಮುಂಬಯಿ ಪೋಲೀಸ್ ಪಡೆಯ ಮುಖ್ಯಾಧಿಕಾರಿ. ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ (traffic) ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ. ವಾಹನ ಸಾರಿಗೆ ಪೋಲೀಸ್ ಮುಂಬಯಿ ಪೋಲಿಸಿಗೆ ಸೇರಿದೆ ಅರೆ-ಸ್ವಾಯತ್ತ ಪಡೆಯಾಗಿದೆ.
 
ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ , ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ , ಕೇಂದ್ರಾಡಳಿತ ಪ್ರದೇಶಗಳಾದ ದಮನ್,ದಿಯು , ದಾದ್ರ ಮತ್ತು ನಗರಹವೇಲಿ ಗಳಿಗೂ ಹಬ್ಬಿದೆ. ಇದಲ್ಲದೆ , ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ (Small Causes Court) ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ.
 
೬ ಜನ ಸಂಸತ್ತಿನಲ್ಲಿಯೂ, ೩೪ ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ.
ಈಗ, [[ಶಿವಸೇನ ಪಕ್ಷ]], ಬಹುಮತದಿಂದ ಗೆದ್ದು ಆಯ್ಕೆಯಾಗಿದೆ. ಬೃಹನ್ ಮುಂಬಯಿ ನಗರಪಾಲಿಕೆಯ ಅಧಿಕಾರವಹಿಸಿಕೊಂಡಿದೆ. ಇನ್ನು ನಾಲ್ಕು ವರೆ ವರ್ಷದ ಪ್ರಗತಿಕಾರ್ಯಗಳನ್ನೆಲ್ಲಾ, ಅದೇ ನಿರ್ವಹಿಸಬೇಕಾಗಿದೆ.
== ಸಂಚಾರ ವ್ಯವಸ್ಥೆ ==
ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ <div style="float:{{dir|{{CURRENTCONTENTLANGUAGE}}|left|right}};width:50%;font-weight:bold;line-height:110%;margin:1% 1% 0% 1%;">
<div style="float:{{dir|{{CURRENTCONTENTLANGUAGE}}|left|right}};margin:1% 1% 0% 1%;color:red"> கூகுள்+</div>
<div style="float:{{dir|{{CURRENTCONTENTLANGUAGE}}|left|right}};margin:1% 1% 0% 1%;color:blue"> முகநூல்</div>
"https://ta.wikipedia.org/wiki/பயனர்:Shriheeran/மணல்தொட்டி" இலிருந்து மீள்விக்கப்பட்டது